Tuesday, September 18, 2012

ಆಕಾಶದ ರೌದ್ರರೂಪ


ಮೊನ್ನೆ ಗುಡುಗು ಸಿಡಿಲಿನಿಂದ ತುಂಬಿರುವ ಬಿರುಗಾಳಿ ಬಂದಿತ್ತು ನನ್ನ ಮನೆಯ ಬಾಗಿಲಿಗೆ. ಆಗ ಕೆಲವೇ ಕ್ಷಣಗಳು ಆಕಾಶ ತನ್ನ ಬೇರೆಯೇ ರೂಪ ತೋರಿತ್ತು.. ಆಗ ಹೊಳೆದ ಸಾಲುಗಳು :

ಇಂದೇಕೆ ನೀ ಕೆರಳಿದ ರೂಪ ತೋರಿರುವೆ ನೀಲಾಕಾಶ?

ಮೇಘರಾಜನ ಆರ್ಭಟಕೆ ನಲುಗಿ ನರಳಿ ದಿಯೋ ?
ಅಥವಾ ಸಿಡುಕಿ ಧಗಧಗಿಸಿತಿರುವೆ?

ಅದೇಕೆ ನಿನ್ನ ನೋಡಿದಾಗ ತಳಮಳಿಸುತಿದೆ ನನ್ನ ಮನ?
ಮನದ ಅಲ್ಲೋಲ ಕಲ್ಲೋಲದ ಪ್ರತಿಬಿಂಬವಾಗೇಕೆ  ನಿಂದಿರುವೆ?

ಕ್ಷಣಮಾತ್ರದ ನಿನ್ನೀ ರುದ್ರರೂಪ ಮನಸಿನಲೇಕೆ  ತಳವೂರಿದೆ?
ದಿನಕಳೆದರೂ ಮಾಸದ ಚಿತ್ರದಂತೇಕೆ  ಹೃದಯದಲಿ ನಾಟಿರುವೆ ?

Thursday, August 18, 2011

ಸೋಮಾರಿತನ

ಅಂತೂ ಬರೆದೆ ಅಂತ ಬರೆದು ಆಗಲೇ ಎರಡು ವರ್ಷ ಆಗ್ತಾ ಬಂತು. ನಾನು ಎಷ್ಟರ ಮಟ್ಟಿಗೆ ಬ್ಲಾಗ್ ಬರೀತೀನಿ ಅಂತ ಆಗಲೇ ಗೊತ್ತಾಗ್ತಾ ಇದೆ. ಬರೀ ಲೇಖಕಿ ಆಗೋ ಕನಸು ಕಾಣೋದೇ ಆಯ್ತು, ಕಾರ್ಯ ರೂಪದಲ್ಲಿ ಇಳಿಸಲು ಮಹಾ ಸೋಮಾರಿತನ. ಎಲ್ಲಿಂದ ಬಂತೋ ಈ ಸೋಮಾರಿತನ ? ಯಾವುದೇ ಪುಸ್ತಕ ಓದೋದಿರಲಿ, ಆಗಾಗ ಜೀವನದಲ್ಲಿ ನಡೆಯುವ ಮನೋರಂಜಕ ಘಟನೆಗಳ ಬಗ್ಗೆ ಗೀಚೋದಿರಲಿ, ಹೊಸ ಹವ್ಯಾಸ ಬೆಳೆಸುವುದಿರಲಿ ಎಲ್ಲೆದರಲ್ಲೂ ಈ ಸೋಮಾರಿತನ ಅಡ್ಡ ಯಾಕೆ ಬರತ್ತೆ? ಹುಂ... ಇದರ ಬಗ್ಗೆ ಯೋಚಿಸಲೂ ಈ ಸೋಮಾರಿತನ ನನ್ನ ಬಿಡದು.
ಅಂತೂ ಎರಡು ವರ್ಷಗಳ ನಂತರ ಅಕ್ಷರಗಳ ಪೋಣಿಸಿದ್ದಾಯ್ತು.
ನೋಡೋಣ ಎಷ್ಟರ ಮಟ್ಟಿಗೆ ನಾನು ಸೋಮಾರಿತನವನ್ನ ಎದುರಿಸ ಬಲ್ಲೆ..
ಈಗಲಾದರೂ ಸ್ವಲ್ಪ ಪ್ರಯತ್ನವ ಮಾಡಿದರಾಯಿತು, ಮನದ ಕಲರವ ಹಾಗು ಸುತ್ತಲಿನ ಕಲರವ ವ ಅಕ್ಷರಗಳಲ್ಲಿ ಸೆರೆಹಿಡಿಯಲು...

Friday, August 28, 2009

ಅಂತೂ ಬರೆದೆ

ನಾನೂ ಬ್ಲಾಗ್ ಬರೆಯೋಣ ಅಂತ ಯೋಚನೆ ಮಾಡಿ ಅಕೌಂಟ್ ತೆಗೆದು ವಾರಗಳಾಯ್ತು. ಏನೂಂತ ಗೀಚಲಿ? ತಿಳಿತಾನೆ ಇಲ್ಲ. ಕಲರವ ಅಂತ ಪುಟಕ್ಕೆ ಹೆಸರೇನೋ ಇಟ್ಟಿದ್ದಾಯ್ತು. ಆದರೆ ಯಾರ ಕಲರವ ನನ್ನ ಮನದೋ ಅಥವಾ ನನ್ನ ಸುತ್ತಲಿನ ಜನಗಳದೋ. ಇರಲಿ. ನಿಧಾನವಾಗಿ ಬರಿತಾ ಹೋದಂತೆ ಸ್ಪಷ್ಟವಾಗಬಹುದು.ಅಂತೂ ಗಣೇಶಾಯ ನಮಹಃ ಮಾಡಿಯಾಯ್ತು ಇವತ್ತು. ನೋಡೋಣಾ ನಾನು ಎಷ್ಟರ ಮಟ್ಟಿಗೆ ಈ ಬ್ಲಾಗ್ ನಲ್ಲಿ ಬರೀತೀನಿ.